ಆದಿಕಂಡ ಮಹಾಂತ (ಜನನ: ೮ ಮೇ ೧೯೫೪, ಮರಣ: ೧೩ ಜನವರಿ ೨೦೧೫) ಒಡಿಶಾದ ಚಿತ್ರಡಾದ ಒಬ್ಬ ಭಾರತೀಯ ಜಾನಪದಶಾಸ್ತ್ರಜ್ಞ. ಅವರು ಒಡಿಶಾದ ಮೊದಲ ಜಾನಪದಶಾಸ್ತ್ರಜ್ಞರಲ್ಲಿ ಒಬ್ಬರು. ಮತ್ತು ಪರ‍್ವ ಭಾರತದ ಜಾನಪದ ಸಂಸ್ಕೃತಿಯ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. == ಜೀವನಚರಿತ್ರೆ == ಮಹಂತ ಅವರು ಭಾರತದ ಒರಿಸ್ಸಾದ ಮಯೂರ್‌ಭಂಜ್‌ನ ಚಿತ್ರಡಾದಲ್ಲಿ ಶಿವ ಪ್ರಸಾದ್ ಮತ್ತು ಸತ್ಯಭಾಮಾ ಮೊಹಾಂತ ದಂಪತಿಗಳಿಗೆ ಜನಿಸಿದರು. ಅವರು ರಾಂಚಿ ವಿಶ್ವವಿದ್ಯಾನಿಲಯದಲ್ಲಿ ಒರಿಯಾ ಮಾಸ್ಟರ್ಸ್ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಗೌರವಗಳನ್ನು ಪಡೆದರು. ನಂತರ ಅವರು ಒರಿಸ್ಸಾದ ಜಾನಪದ ಸಂಸ್ಕೃತಿಯಲ್ಲಿ ಪಿಎಚ್‌ಡಿ ಪದವಿ ಪಡೆದರು. ಅದೇ ವಿಶ್ವವಿದ್ಯಾನಿಲಯದಲ್ಲಿ ೧೯೮೮ವರಲ್ಲಿ ತಮ್ಮ ಪ್ರಬಂಧ "ಒಡಿಶಾರ ಕುರ್ಮಲಿ ಲೋಕಗೀತಾ" ( ಕುದ್ಮಲಿ/ಕುರ್ಮಲಿ ಒರಿಸ್ಸಾದ ಜಾನಪದ ಹಾಡುಗಳು) ದಲ್ಲಿ ಅಧ‍್ಯಯನವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಮೊಹಾಂತ ಅವರು ಒರಿಸ್ಸಾ ಸರ್ಕಾರಕ್ಕಾಗಿ ಶಾಲೆಗಳ ಉಪ-ನಿರೀಕ್ಷಕರಾಗಿದ್ದರು. ಬಸಂತ ಕಿಶೋರ್ ಸಾಹೂ ಮತ್ತು ಸಂಸ್ಥಾಪಕ ಮನೀಂದ್ರ ಮೊಹಾಂತಿ ಅವರೊಂದಿಗೆ ಒರಿಯಾ ಮಕ್ಕಳ ಸಾಹಿತ್ಯ ಸಂಶೋಧನಾ ಸಂಸ್ಥೆಗಾಗಿ ಕೆಲಸ ಮಾಡಿದರು. ಮಹಂತ ಅವರು ೨೦೦೯-೨೦೧೦ರ ಶೈಕ್ಷಣಿಕ ವರ್ಷದಲ್ಲಿ ಒರಿಸ್ಸಾ ಸರ್ಕಾರವು ರಾಜ್ಯ ಪಠ್ಯಕ್ರಮಕ್ಕೆ ಸೇರಿಸಲಾದ ಎರಡು ಪಠ್ಯಪುಸ್ತಕಗಳನ್ನು ೨೦೦೮ರಲ್ಲಿ ಬರೆದರು. ಅವುಗಳು; ಒಡಿಶಾ ರಾ ಸ್ರಸ್ತ ಆದಿಬಸಿ ಲೋಕ ಕಥಾ, ಭಾಗ 1 ಮತ್ತು ಇತಿಹಾಸರು ಶಿಕ್ಷಿಬ ಆಸಾ. ಒರಿಸ್ಸಾದಲ್ಲಿ, ಮಹಾಂತ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಹೆಚ್ಚುವರಿಯಾಗಿ, ಅವರು ಫಾರುವಾ (೧೯೯೮-೨೦೦೨), ಕುಡ್ಮಿ ಕಥಾ (೧೯೯೫-೨೦೦೮), ಮತ್ತು ಜಾನಪದ ನಿಯತಕಾಲಿಕಗಳಿಗೆ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. == ಪ್ರಶಸ್ತಿ ಮತ್ತು ಗೌರವಗಳು == ೧೯೮೫: ಬಿಸುಬಾಮಿಲನ ಸಿಸು ಸಾಹಿತ್ಯಿಕ ಸಮ್ಮಾನ - ಪ್ರಜಾತಂತ್ರ ಪ್ರಚಾರ ಸಮಿತಿ ೧೯೮೬: ಕನಕದರ‍್ಗಾ ಮೋತಿಮಹಲ್ ಗದರದಂಗ ಪುರಿ ಪ್ರಶಸ್ತಿ ೧೯೮೭: ಕೆಂದೂಜರ್ ಜಿಲ್ಲಾಸ್ತರಿಯಾ ಸಿಸು ಸಾಹಿತ್ಯ ಸಂಸದ್ ಪ್ರಶಸ್ತಿ ೧೯೮೭: ಸಿಸು ಸಾಹಿತ್ಯ ಪ್ರಶಸ್ತಿ - ಕುವಂತರ ಭುವನೇಶ್ವರ್ ೧೯೮೮: ರಸಚಂದ ಕೆಂದುಝರ್ ಪ್ರಶಸ್ತಿ ೧೯೯೮: ಶ್ರೀ ಶ್ರೀ ಜಗನ್ನಾಥ ತತ್ವಾಸ್ರೋಮ್ ಉದಯ್ಬತು ಜಗತ್ಸಿಂಗ್ಪುರ್ ಪ್ರಶಸ್ತಿ ೧೯೯೮: ಅಗಾಮಿ ಸತಾಬ್ದಿ ಭುವನೇಶ್ವರ್ ಜುಮರ್ ಗಬೆಸಕ ಪ್ರಶಸ್ತಿ ೧೯೯೯: ಮಯರ‍್ಭಂಜ್ ಬನಿಪೀಠ ಹಲ್ದಿಪದ ಪ್ರಶಸ್ತಿ ೨೦೦೦: ಮಯೂರ್‌ಭಂಜ್ ಜಿಲಾಸ್ತರಿಯಾ ಸೆಬಕ ಸಮಿತಿ ಪ್ರಶಸ್ತಿ ೨೦೦೧: ಸಾರಸ್ವತ ಬನಿಪುತ್ರ ಪ್ರಶಸ್ತಿ ೨೦೦೧: ಪುರುಲಿಯಾ ಪಶ್ಚಿಮಬಂಗಾ ಲೋಕಸಾಹಿತ್ಯ ಪ್ರಶಸ್ತಿ ೨೦೦೫: ರಾಜ್ಯಸ್ತ್ರೀಯ ಕೃತಿ ಸಿಖಾಕ ಪ್ರಶಸ್ತಿ ೨೦೦೮: ರಜತ್ ಜಯಂತಿ ಪ್ರಬಂಧಿಕಾ ಪ್ರಶಸ್ತಿ - ಮಯರ‍್ಭಂಜ್ ಸಾಹಿತ್ಯ ಪರಿಷತ್ತು ೨೦೧೦: ಕಾಳಿಂಗರತ್ನ ಸಮ್ಮಾನ್ ಪ್ರಶಸ್ತಿ == ಆಯ್ದ ಪ್ರಕಟಣೆಗಳು == ೧೯೮೫: ಉತ್ತರ ಒಡಿಶಾರ ಲೋಕ ಕಥಾ ೧೯೮೮: ಗಪಾ ಸುನಿಬಾ ಆಸಾ ೧೯೯೧: ಸತರ‍್ಥ ಗಲ್ಪ ೧೯೯೩: ಜ್ಞಾನ ತಪಸ್ವಿ ರಾಧಾಕೃಷ್ನನ್ ೧೯೯೭: ಒಡಿಶಾ ರಾ ಶ್ರೇಷ್ಠ ಆದಿವಾಸಿ ಲೋಕ ಕಥಾ ೧೯೯೮: ಟೈರಿಂಗ್ ರಿಂಗಾ ೧೯೯೯: ಕುಡ್ಮಿ ಲೋಕ ಕಥಾ ೨೦೦೨: ಕರಮ್ ಕಥಾ ೨೦೦೩: "ಈಸ್ರ‍್ನ್ ಇಂಡಿಯಾದಲ್ಲಿ ಟ್ರೈಬಲ್ ಸೊಸೈಟಿಯ ಜಾನಪದ ಚಿಕಿತ್ಸಾ ವ್ಯವಸ್ಥೆ" (ಪುಟಗಳು ೬೨–೬೫) ಚೇಂಜಿಂಗ್ ಟ್ರೈಬಲ್ ಲೈಫ್: ಎ ಸೋಶಿಯೋ-ಫಿಲಾಸಫಿಕಲ್ ರ‍್ಸ್ಪೆಕ್ಟಿವ್ ಪದ್ಮಜಾ ಸೇನ್ ಅವರಿಂದ ೨೦೦೫: ಕುಡ್ಮಿ ಜನ್ಮ ಸಂಸ್ಕಾರ ೨೦೦೬: ಕರ‍್ಮಲಿ ಲೋಕ ಕಥಾ ಓ ಲಕ ಗೀತಾ: ಸಾಮಾನ್ಯ ಕಥನ ೨೦೦೬: ಜುಮರ್ ಸಮೀಖ್ಯ ೨೦೦೬: ಚೆಂಗ್ ರ‍್ಗರ್ ಖಪ್ರಾ ಪಿತಾ ೨೦೦೭: ಕುಡ್ಮಿ ಬಿಪ್ಲಬಿ ನೇತಾ ೨೦೦೭: ಚೌ ನೃತ್ಯ ಸಾಮಾನ್ಯ ಕಥನ ೨೦೦೭: ಮಯರ‍್ಭಂಜ ರ ಲೋಕಬಾದ್ಯ ೨೦೦೭: ಕುಡ್ಮಿ ಜಾತಿ ಏಕ ಬಿಹಂಗಬಲೋಕನಾ ೨೦೦೭: "ಪ್ರಾಚ್ಯ ಭಾರತದ ಬುಡಕಟ್ಟು ಜಾನಪದದಲ್ಲಿ ಪರಿಸರ ಸಿದ್ಧಾಂತಗಳು" (ಪುಟಗಳು ೭೧–೭೭) ಅರಣ್ಯ, ರ‍್ಕಾರ ಮತ್ತು ಬುಡಕಟ್ಟಿನಲ್ಲಿ ಚಿತ್ತರಂಜನ್ ಕುಮಾರ್ ಪಾಟಿ ಅವರಿಂದ ೨೦೦೮: ಉತ್ತರ ಒಡಿಶಾ ರಾ ಲೋಕ ನೃತ್ಯ == ಉಲ್ಲೇಖಗಳು ==